ರೈತರ ಆಕ್ರೋಶ ಕೊನೆ ಕ್ಷಣದಲ್ಲಿ ಅಮಿತ್ ಶಾ ಮಂಡ್ಯ ಭೇಟಿಯಲ್ಲಿ ಬದಲಾವಣೆ..!

suddionenews
1 Min Read

ಮಂಡ್ಯ: ಈ ಬಾರಿ ಬಿಜೆಪಿ ಎಲ್ಲೆಲ್ಲಾ ಸೋಲು ಕಂಡಿದೆಯೋ ಅಲ್ಲೆಲ್ಲಾ ಗೆಲುವು ಪಡೆಯಲೇಬೇಕು, ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ ಪಣ ತೊಟ್ಟಿದೆ. ಅದರ ಭಾಗವಾಗಿಯೇ ಮೈಸೂರು ಹಳೇ ಭಾಗದಲ್ಲಿ ಶತಾಯಗತಾಯ ಬಿಜೆಪೊಯನ್ನು ತರಬೇಕೆಂದು ಪಣ ತೊಟ್ಟಿದ್ದಾರೆ. ಇದೀಗ ಅದರ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಮಂಡ್ಯ ಜಿಲ್ಲೆಗೆ ಭೇಟಿ ನೀಡಲು ಪ್ಲ್ಯಾನ್ ಮಾಡಿದ್ದರು. ಇದೀಗ ಆ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದೆ.

ಅಮಿತ್ ಶಾ ಅವರು ಬೆಂಗಳೂರಿನಿಂದ ಯಲಹಂಕದ ಏರ್ ಬೇಸ್ ನಿಂದ ಹೆಲಿಕಾಪ್ಟರ್ ಪ್ರಯಾಣ ಬೆಳೆಸಿ, ಮಂಡ್ಯದ ಭೈರಾಪಟ್ಟಣದ ಹೆಲಿಪ್ಯಾಡ್ ಗೆ ಬಂದಿಳಿಯುವ ಪ್ಲ್ಯಾನ್ ಈ ಮೊದಲನೆಯದ್ದಾಗಿತ್ತು. ಆದರೆ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದು, ಹೀಗಾಗಿ ಮಾರ್ಗ ಬದಲಾವಣೆಯಾಗಿದೆ. ಬೆಂಗಳೂರಿನಿಂದ ಹುಲಿಗೆಪುರಕ್ಕೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿ, ಹುಲಿಗೆಪುರ ಹೆಲಿಪ್ಯಾಡ್ ನಿಂದ ರಸ್ತೆ ಮೂಲಕ ಗೆಜ್ಜಲಗೆರೆಗೆ ತೆರಳುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಇನ್ನು ರೈತರ ಹೋರಾಟ ಹಿನ್ನೆಲೆ ರಸ್ತೆ ಬದಲು ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಪ್ರಯಾಣಿಸಿ ಹೆಲಿಕಾಪ್ಟರ್ ಮೂಲಕ ಪಿಇಟಿ ಗ್ರೌಂಡ್‍ಗೆ ಬಂದು ಅಮಿತ್ ಶಾ ವಾಪಸ್ಸಾಗುವ ಬಗ್ಗೆ ಬದಲಾವಣೆ ಮಾಡಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *