Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

Ambedkar Bronze Statue : ಆಕಾಶದೆತ್ತರದ ಅಂಬೇಡ್ಕರ್ : ದೇಶದ ಅತಿ ಎತ್ತರದ ಕಂಚಿನ ಪ್ರತಿಮೆಯ ವಿಶೇಷತೆಗಳು ಮತ್ತು ವೈಶಿಷ್ಟ್ಯಗಳು ಇಲ್ಲಿದೆ ಸಂಪೂರ್ಣ ಮಾಹಿತಿ… ವಿಡಿಯೋ ನೋಡಿ…!

Facebook
Twitter
Telegram
WhatsApp

 

ಸುದ್ದಿಒನ್ ಡೆಸ್ಕ್

ತೆಲಂಗಾಣ : ಹೈದರಾಬಾದ್ ನ ಹೃದಯ ಭಾಗದಲ್ಲಿ, ಹುಸೇನ್ ಸಾಗರದ ತೀರದಲ್ಲಿ,  ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ದೇಶದಲ್ಲೇ ಅತಿ ಎತ್ತರದ ದೊಡ್ಡ ಕಂಚಿನ ಪ್ರತಿಮೆ ಕೆಲವೇ ಗಂಟೆಗಳಲ್ಲಿ ಅನಾವರಣಗೊಳ್ಳಲಿದೆ.

ಅಂಬೇಡ್ಕರ್ ಅವರ 132ನೇ ಜಯಂತಿ ಅಂಗವಾಗಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಶುಕ್ರವಾರ (ಏಪ್ರಿಲ್ 14) ಈ ಬೃಹತ್ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

2016ರ ಏಪ್ರಿಲ್ 14ರಂದು ಅಂಬೇಡ್ಕರ್ ಅವರ 125ನೇ ಜಯಂತಿ ಸಂದರ್ಭದಲ್ಲಿ 125 ಅಡಿ ಎತ್ತರದ ಪ್ರತಿಮೆ ಸ್ಥಾಪಿಸುವುದಾಗಿ ಸಿಎಂ ಕೆಸಿಆರ್ ಘೋಷಿಸಿದ್ದರು.  ಘೋಷಣೆಯಂತೆಯೇ ತೆಲಂಗಾಣ ಸರ್ಕಾರ ಅತ್ಯಂತ ಮಹತ್ವಾಕಾಂಕ್ಷೆಯ ಪ್ರತಿಮೆ ನಿರ್ಮಾಣವನ್ನು ಪೂರೈಸಿದೆ. ಇಂದು ಅಂಬೇಡ್ಕರ್ ಅವರ 132ನೇ ಜಯಂತಿ ಅಂಗವಾಗಿ  ಪ್ರತಿಮೆ ಅನಾವರಣಗೊಳ್ಳಲಿದೆ.

ಈಗ ಆ ಮಹಾ ಮೂರ್ತಿಯ ವಿಶೇಷತೆಗಳನ್ನು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಹುಸೇನಸಾಗರದ ತೀರದಲ್ಲಿರುವ ಎನ್‌ಟಿಆರ್ ಗಾರ್ಡನ್ ಬಳಿ ಸುಮಾರು 11.80 ಎಕರೆ ಪ್ರದೇಶದಲ್ಲಿ ಈ ಬೃಹತ್ ಪ್ರತಿಮೆಯ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರತಿಮೆಯ ಎತ್ತರ 125 ಅಡಿ. ಅಗಲ 45.5 ಅಡಿ. ಈ ವಿಗ್ರಹವು ನಿಂತಿರುವ ಪೀಠವು 50 ಅಡಿ ಎತ್ತರ ಮತ್ತು 172 ಅಡಿ ಅಗಲವಿದೆ. ಸ್ಮಾರಕದ ಎತ್ತರ ನೆಲದಿಂದ 175 ಅಡಿಯಷ್ಟಿದೆ. ಇದು ದೇಶದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಎಂದು ತೆಲಂಗಾಣ ಸರ್ಕಾರ ಹೇಳಿಕೊಂಡಿದೆ.

ಸಂಸತ್ತಿನ ಆಕಾರದಲ್ಲಿ ಎರಡು ಎಕರೆಯಲ್ಲಿ ಪೀಠವನ್ನು ನಿರ್ಮಿಸಲಾಗಿದೆ. ಪೀಠದ ಒಳಗಿನ ಸ್ಮಾರಕ ಕಟ್ಟಡವು 27,556 ಅಡಿಗಳ ನಿರ್ಮಾಣ ಪ್ರದೇಶವನ್ನು ಹೊಂದಿದೆ. ಇದು ಗ್ರಂಥಾಲಯ, ವಸ್ತುಸಂಗ್ರಹಾಲಯ, ಜ್ಞಾನ ಭವನ ಮತ್ತು ಅಂಬೇಡ್ಕರ್ ಅವರ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಘಟನೆಗಳ ಫೋಟೋ ಗ್ಯಾಲರಿಯನ್ನು ಹೊಂದಿರುತ್ತದೆ.  ಕಟ್ಟಡದ ಒಳಗೆ ಆಡಿಯೋ ವಿಜುಯಲ್ಸ್  ಕೊಠಡಿಗಳಿವೆ. ಅಂಬೇಡ್ಕರ್ ಅವರ ಕೃತಿಗಳು ಸೇರಿದಂತೆ ಅಂಬೇಡ್ಕರ್ ಅವರ ಜೀವನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಜೋಡಿಸಲಾಗಿದೆ.

2.93 ಎಕರೆಯಲ್ಲಿ ಥೀಮ್ ಪಾರ್ಕ್ ಕೂಡ ಸ್ಥಾಪಿಸಲಾಗುತ್ತಿದೆ. ಅದರೊಂದಿಗೆ ರಾಕ್ ಗಾರ್ಡನ್, ವಾಟರ್ ಫೌಂಟೇನ್, ಲ್ಯಾಂಡ್ ಸ್ಕೇಪಿಂಗ್, ಪ್ಲಾಂಟೇಶನ್ ಸ್ಯಾಂಡ್ ಸ್ಟೋನ್ ಇವೆ. ಸ್ಮಾರಕದಲ್ಲಿ ಸುಮಾರು 450 ಕಾರುಗಳನ್ನು ನಿಲ್ಲಿಸಬಹುದು.

146.50 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಪ್ರತಿಮೆ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪ್ರತಿಮೆಯ ತೂಕ 465 ಟನ್. ಇದಕ್ಕಾಗಿ 96 ಟನ್ ಹಿತ್ತಾಳೆಯನ್ನು ಬಳಸಲಾಗಿದೆ. ಈ ಯೋಜನೆಯಲ್ಲಿ ಒಟ್ಟು 791 ಟನ್ ಉಕ್ಕನ್ನು ಬಳಸಲಾಗಿದೆ. ಪ್ರತಿಮೆ ನಿರ್ಮಾಣದ ಜವಾಬ್ದಾರಿಯನ್ನು ಕೆಪಿಸಿ ಪ್ರಾಜೆಕ್ಟ್ ಲಿಮಿಟೆಡ್‌ಗೆ ವಹಿಸಲಾಗಿದೆ. ಪ್ರತಿಮೆಯ ಭಾಗಗಳನ್ನು ದೆಹಲಿಯಲ್ಲಿ ತಯಾರಿಸಿ ಹೈದರಾಬಾದ್‌ಗೆ ತರಲಾಗಿದೆ. ಭಾರೀ ಕ್ರೇನ್‌ಗಳ ಸಹಾಯದಿಂದ ಪ್ರತಿಮೆಯ ಭಾಗಗಳನ್ನು ವ್ಯವಸ್ಥಿತವಾಗಿ ಸ್ಥಾಪಿಸಲಾಗಿದೆ. ಭೂಕಂಪ, ಭಾರೀ ಗಾಳಿ ಮತ್ತು ಮಳೆಯಂತಹ ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳುವಂತೆ ಪ್ರತಿಮೆಯನ್ನು ನಿರ್ಮಿಸಲಾಗಿದೆ.
ಪ್ರತಿಮೆಯನ್ನು ನಿರ್ಮಿಸಲು 425 ಕಾರ್ಮಿಕರು ಪ್ರತಿದಿನ ಕೆಲಸ ಮಾಡಿದ್ದಾರೆ.

ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗೊಂಡೂರು ಗ್ರಾಮದ ರಾಮ್ ವಿ ಸುತಾರ್ ಈ ಪ್ರತಿಮೆಯನ್ನು ವಿನ್ಯಾಸಗೊಳಿಸಿದ್ದಾರೆ.
ಗುಜರಾತಿನ ನರ್ಮದಾ ನದಿಯ ಮೇಲೆ ಏಕತೆಯ ಪ್ರತಿಮೆಯ ಸಂಕೇತವಾಗಿ ಸರ್ಧಾರ್ ವಲ್ಲಭಭಾಯಿ ಪಟೇಲ್ ಅವರ ವಿಶ್ವದ ಅತಿದೊಡ್ಡ ಪ್ರತಿಮೆಯನ್ನು ನಿರ್ಮಿಸಿದವರೂ ಇವರೇ. ರಾಮ್ ವಿ ಸುತಾರ್ ಮತ್ತು ಅವರ ಮಗ ಅನಿಲ್ ಸುತಾರ್ ಪ್ರತಿಮೆಯನ್ನು ವಿನ್ಯಾಸಗೊಳಿಸಿದ್ದಾರೆ. ಈ ಪ್ರತಿಮೆಯ ನಿರ್ಮಾಣಕ್ಕೆ 14ನೇ ಏಪ್ರಿಲ್ 2016 ರಂದು ಶಂಕುಸ್ಥಾಪನೆ ಮಾಡಲಾಗಿತ್ತು. ಕಾರಣಾಂತರಗಳಿಂದ ವಿಳಂಬವಾಗಿ ಏಳು ವರ್ಷಗಳ ನಂತರ ಪೂರ್ಣಗೊಂಡಿದೆ.

ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಸರ್ಕಾರ 10 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ಉದ್ಘಾಟನೆಯನ್ನು ಬೌದ್ಧ ಸಂಪ್ರದಾಯದಂತೆ ಮಾಡಲಾಗುತ್ತದೆ.
ಪ್ರತಿಮೆ ಅನಾವರಣ ಅಂಗವಾಗಿ ಸಿಎಂ ಕೆಸಿಆರ್ ಮೊದಲಿಗೆ ಫಲಕ ಅನಾವರಣ ಮಾಡಲಿದ್ದಾರೆ. 30 ಬೌದ್ಧ ಗುರುಗಳು ಸಿಎಂ ಅವರನ್ನು ಪ್ರಾರ್ಥನೆಯೊಂದಿಗೆ ಪ್ರತಿಮೆ ಬಳಿಗೆ ಕರೆದೊಯ್ಯುತ್ತಾರೆ. ನಂತರ ಸ್ತೂಪದ ಒಳಗಿನ ಲಿಫ್ಟ್‌ನಲ್ಲಿ ಕೆಸಿಆರ್ ಅಂಬೇಡ್ಕರ್ ಪ್ರತಿಮೆಯ ಪಾದಗಳ ಬಳಿ ಬಂದು ನಮನ ಸಲ್ಲಿಸುತ್ತಾರೆ.

ಪ್ರತಿಮೆ ಅನಾವರಣ ಸಂದರ್ಭದಲ್ಲಿ 125 ಅಡಿ ಎತ್ತರದ ಅಂಬೇಡ್ಕರ್ ಅವರ ಪ್ರತಿಮೆಗೆ ವಿಶೇಷವಾಗಿ ಹೂಮಾಲೆ, ಗುಲಾಬಿ ಮತ್ತು ವೀಳ್ಯದೆಲೆಗಳಿಂದ ಬೃಹತ್ ಹೂವಿನ ಹಾರವನ್ನು ಮಾಡಲಾಗಿದೆ. ಕ್ರೇನ್ ಸಹಾಯದಿಂದ ಅಂಬೇಡ್ಕರ್ ಅವರಿಗೆ ಹೂವಿನ ಹಾರವನ್ನು ಹಾಕಲಾಗುವುದು.  ಪ್ರತಿಮೆ ಅನಾವರಣ ಬಳಿಕ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗುವುದು.
ಪ್ರತಿಮೆ ಅನಾವರಣಕ್ಕೆ ಅಪಾರ ಜನಸ್ತೋಮವೂ ಸೇರುವ ನಿರೀಕ್ಷೆಯಿದೆ. ಅವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.

ರಾಜ್ಯದ ವಿವಿಧ ಕಡೆಗಳಿಂದ ಜನರು ಆಗಮಿಸಲು ಸುಮಾರು 750 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು 50,000 ಜನರು ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಮಾಡಿದ್ದಾರೆ. ನೀರು, ಮಜ್ಜಿಗೆ ಪ್ಯಾಕೆಟ್ ಗಳು ಹಾಗೂ 80 ಸಾವಿರ ಸಿಹಿ ತುಂಬಿದ ಪ್ಯಾಕೆಟ್ ಗಳನ್ನು ಸಿದ್ಧಪಡಿಸಲಾಗುತ್ತದೆ. ಪ್ರತಿಮೆ ಅನಾವರಣಗೊಳಿಸಿದ ನಂತರ ಸಿಎಂ ಕೆಸಿಆರ್ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ!

ಈ ರಾಶಿ ಒಲ್ಲದ ಮನಸಿಗೆ ಮದುವೆ ಯೋಗ, ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ! ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್-29,2024 ಸೂರ್ಯೋದಯ: 06:16, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944,

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

error: Content is protected !!