ಬೆಂಗಳೂರು: ಒಂದು ಕಡೆ ಆಗಸ್ಟ್ ಎಂಡ್ ಅಥವಾ ಸೆಪ್ಟೆಂಬರ್ ವೇಳೆಗೆ ಕೊರೊನಾ ಸೋಂಕಿತರು ಹೆಚ್ಚಾಗುವ ಸಾಧ್ಯತೆ ಇದೆ ಅಂತ ತಜ್ಞರು ಅದಾಗಲೇ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಬೆನ್ನಲ್ಲೆ ಸಾಲು ಸಾಲು ಹಬ್ಬಗಳುಒಂದು ಕಡೆ, ಮತ್ತೊಂದು ಕಡೆ ಶಾಲೆಗಳು ಬೇರೆ ಆರಂಭವಾಗ್ತಾ ಇದಾವೆ. ಈ ನಡುವೆ ಅದ್ದೂರಿ ಗಣೇಶ ಹಬ್ಬಕ್ಕೆ ರಾಜಕೀಯ ವ್ಯಕ್ತಿಗಳೇ ಒತ್ತಡ ಹೇರುತ್ತಾ ಇದ್ದಾರೆ. ಇದೆಲ್ಲದಕ್ಕೂ ಉತ್ತರ ಸೆಪ್ಟೆಂಬರ್ 5ರ ಸಭೆ ಬಳಿಕ ತಿಳಿಯಲಿದೆ.
ಈ ಬಗ್ಗೆ ಸಚಿವ ಆರ್ ಅಶೋಕ್ ಮಾತನಾಡಿದ್ದು, ಇಂದು ನಡೆದ ಸಭೆಯಲ್ಲಿ ಗಣೇಶೋತ್ಸವ ಕುರಿತಂತೆ ಯಾವುದೇ ಚರ್ಚೆ ನಡೆದಿಲ್ಲ. ಸೆಪ್ಟೆಂಬರ್ 5 ರ ನಂತರ ಅದಕ್ಕೆ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುತ್ತೆ ಎಂದಿದ್ದಾರೆ.
ಗಣೇಶ ಹಬ್ಬವನ್ನ ಹಲವು ಜಿಲ್ಲೆಗಳಲ್ಲಿ ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತೆ. ಹೀಗಾಗಿ ಗಣೇಶೋತ್ಸವ ವಿಚಾರದಲ್ಲಿ ಯೋಚಿಸಿ ದೊಡ್ಡ ಹೆಜ್ಜೆ ಇಡಬೇಕಾಗುತ್ತದೆ. ಜಿಲ್ಲೆಗಳಲ್ಲಿ ಡಿಸಿ, ಎಸ್ಪಿಗಳಿಂದ ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ. ಮುಂಜಾಗ್ರತ ಕ್ರಮಗಳನ್ನ ಗಮನಿಸಬೇಕಾಗುತ್ತದೆ ಎಂದಿದ್ದಾರೆ.