in

ಕೋಲಾರ ಸೇಫ್ ಅಲ್ಲ ಅಂತಿದೆ ಅಹಿಂದ ಟೀಂ : ಕ್ಷೇತ್ರ ಬದಲಾಯಿಸುತ್ತಾರ ಸಿದ್ದರಾಮಯ್ಯ..?

suddione whatsapp group join

ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿಯೂ ಹೆಚ್ಚು ಸುದ್ದಿಯಲ್ಲಿದ್ದರು. ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೋ ಆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಟ್ರಾಂಗ್ ಕ್ಯಾಂಡಿಡೇಟ್ ಹಾಕುವ ಯೋಜನೆಯಲ್ಲಿದ್ದರು. ಆದ್ರೆ ಬಿಜೆಪಿಗೆ ಸೆಡ್ಡು ಹೊಡೆದಂತೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಅನೌನ್ಸ್ ಮಾಡಿದರೂ. ಇದೀಗ ಆ ಕ್ಷೇತ್ರ ಬದಲಾವಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಕೋಲಾರದಲ್ಲಿ ಸಿದ್ದರಾಮಯ್ಯ ಅಂದುಕೊಂಡಷ್ಟು ಗೆಲುವು ಸುಲಭವಲ್ಲ ಎಂಬ ಮಾತುಗಳು ಅದಾಗಲೇ ಕೇಳಿ ಬಂದಿದೆ. ಹೀಗಾಗಿ ಕೋಲಾರದ ಒಳಾಂಗಣ ಪರಿಸ್ಥಿತಿ ಏನು ಎಂಬುದನ್ನು ತಿಳಿಯುವುದಕ್ಕೆ ಅಹಿಂದ ಟೀಂ ಹೋಂ ವರ್ಕ್ ಮಾಡಿತ್ತು. ಇದೀಗ ಆ ವರದಿ ಸಿದ್ದರಾಮಯ್ಯ ಅವರ ಕೈಸೇರಿದೆ.

ಸದ್ಯ ಸಿದ್ದರಾಮಯ್ಯ ಪ್ರಜಾಧ್ವನಿ ಯಾತ್ರೆಯ ಮೂಲಕ ಜನರನ್ನು ತಲುಪುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಉತ್ತರ ಕರ್ನಾಟಕದ ಪ್ರವಾಸದಲ್ಲಿದ್ದಾರೆ. ಸಿದ್ದರಾಮಯ್ಯ ಕೈ ಸೇರಿರುವ ವರದಿಯ ಪ್ರಕಾರ, ಕೋಲಾರದಲ್ಲಿ ಅಹಿಂದ ತಂತ್ರ ವರ್ಕೌಟ್ ಆಗುವುದು ಅನುಮಾನ ಎನ್ನಲಾಗಿದೆ. ಕಾಂಗ್ರೆಸ್ ಕೋಲಾರ ಕ್ಷೇತ್ರದಲ್ಲಿ ಬೂತ್ ಮಟ್ಟದ ನಾಯಕರಿಲ್ಲ. ಈಗಾಗಲೇ ಅಹಿಂದ ಮತಗಳು ಚದುರಿ ಹೋಗಿವೆ. ಆ ಮತಗಳೆಲ್ಲಾ ಜೆಡಿಎಸ್ – ಬಿಜೆಪಿ ಪಾಲಾಗಿವೆ. ಅಹಿಂದ ಮತಗಳನ್ನು ನಂಬಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಧೈರ್ಯ ಮಾಡುವಂತಿಲ್ಲ. ಹೊಸದಾಗಿ ಮತ್ತೆ ಎಲ್ಲವನ್ನು ತನ್ನತ್ತ ಸೆಳೆಯುವ ಸಾಹಸಕ್ಕೆ ಕೈ ಹಾಕಲು ಸಮಯವೂ ಇಲ್ಲ. ಹೀಗಾಗಿ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆಯೇ ಬೆಟರ್ ಎನ್ನುವುದು ಹಲವರ ಅಭಿಪ್ರಾಯವಾಗಿದೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಚನ್ನಪಟ್ಟಣದಿಂದ ರಮ್ಯಾ ಕಣಕ್ಕಿಳಿಸಲು ಚಿಂತನೆ : ಟಾರ್ಗೆಟ್ ಹೆಚ್ಡಿಕೆ

ಟೀಕೆಗಳಿಗೆ ಭಯ ಪಟ್ಟು ಹಿಂದೆ ಸರಿದರಾ ಅಶೋಕ್..? ಮತ್ತೆ ಗೋಪಾಲಯ್ಯರಿಗೆ ಮಣೆ ಹಾಕುತ್ತಾರಾ..?