in

ತುಮಕೂರಿನಲ್ಲಿ ಅಜ್ಜಯ್ಯನ ದರ್ಶನ ಪಡೆದು.. ಆದಿಚುಂಚನಗಿರಿಯತ್ತ ಹೊರಟ ಉಪ ಮುಖ್ಯಮಂತ್ರಿ ಡಿಕೆಶಿ

suddione whatsapp group join

ತುಮಕೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ತಮ್ಮ ನೆಚ್ಚಿನ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದಾರೆ. ಅಜ್ಜಯ್ಯನಿಗೆ ತೀರಾ ಭಕ್ತಿಯಿಂದ ನಡೆದುಕೊಳ್ಳುವುದು ಎಲ್ಲರಿಗೂ ಗೊತ್ತೆ ಇದೆ. ಅದರಲ್ಲೂ ಡಿಕೆ ಶಿವಕುಮಾರ್ ಅವರು ಏ‌ನನ್ನೇ ಕೇಳಿದರೂ ಅಜ್ಜಯ್ಯ ಅದನ್ನು ಈಡೇರಿಸಿದ್ದಾರೆ. ಚುನಾವಣೆಯಲ್ಲೂ ಬಹುಮತ ಬರುವಂತೆ ಮಾಡಪ್ಪ ತಂದೆ ಎಂದೇ ಬೇಡಿಕೊಂಡಿದ್ದರಂತೆ. ಅದರಂತರ ಸರ್ಕಾರ ರಚನೆಯಾಗಿದ್ದು, ನಿನ್ನೆ ಡಿಸಿಎಂ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಇಂದು ಜಿಲ್ಲೆಯ ನೊಣವಿನಕೆರೆಯಲ್ಲಿರುವ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ, ದರ್ಶನ ಪಡೆದಿದ್ದಾರೆ. ಕಾಡಸಿದ್ದೇಶ್ವರ ಮಠದ ಅಜ್ಜಯ್ಯನ ಮೂಲ ಗದ್ದುಗೆಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಠದ ಶ್ರೀ ಕರಿವೃಷಭ ದೇಶಿಕೇಂದ್ರದ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಸಚಿವ ಚಲುವರಾಯಸ್ವಾಮಿ, ಶಾಸಕ ಡಾ. ರಂಗನಾಥ್ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ. ಇನ್ನು ಗದ್ದುಗೆಗೆ ಪೂಜೆ ಸಲ್ಲಿಸಿದ ಬಳಿಕೆ ಡಿಕೆಶಿ ಅವರು ನೇರ ಆದಿಚುಂಚನಗಿರಿ ಮಠಕ್ಕೆ ತೆರಳಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಬೆಂಗಳೂರಿನಲ್ಲಿ ಬಾರೀ ಮಳೆ : ಆರ್‌ಸಿಬಿ ಅಭಿಮಾನಿಗಳಿಗೆ ಆತಂಕ…!

ಇವತ್ತು RCB ಮ್ಯಾಚ್ ನಡೆಯುತ್ತಾ..? ನಡೆಯಲ್ವಾ..?