Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಫ್ತಾಬ್ ಕೊಂದೇ ಬಿಡುತ್ತಾನೆ : ಕೊಲೆಗೂ ಕೆಲವು ತಿಂಗಳ ಹಿಂದೆಯೇ ಸ್ನೇಹಿತನಿಗೆ ಮೆಸೇಜ್ ಮಾಡಿದ್ದ ಶ್ರದ್ಧಾ..!

Facebook
Twitter
Telegram
WhatsApp

 

ದೆಹಲಿಯನ್ನಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಘಟನೆ ಶ್ರದ್ಧಾಳ ಕೊಲೆ. ಅಫ್ತಾಬ್ ನನ್ನು ಪ್ರೀತಿಸಿದ ತಪ್ಪಿಗೆ ಇಂದು ಶ್ರದ್ಧಾ ಸ್ಮಶಾಣ ಸೇರಿದ್ದಾಳೆ. ಅಫ್ತಾಬ್ ತನ್ನನ್ನು ಕೊಲೆ ಮಾಡಬಹುದು ಎಂಬುದು ಶ್ರದ್ಧಾಗೆ ಈ ಮೊದಲೇ ಗೊತ್ತಿತ್ತು. ಹೀಗಾಗಿ ತನ್ನ ಸ್ನೇಹಿತನಿಗೆ ಈ ಬಗ್ಗೆ ಮೆಸೇಜ್ ಕೂಡ ಹಾಕಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ಅಫ್ತಾಬ್, ಶ್ರದ್ಧಾ ನನಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಳು. ನನ್ನನ್ನು ಈ ನರಕ ಕೂಪದಿಂದ ಮೊದಲು ಕರೆದುಕೊಂಡು ಹೋಗು. ಇಲ್ಲವಾದಲ್ಲಿ ಈತ ನನ್ನನ್ನು ಕೊಂದು ಬಿಡುತ್ತಾನೆ ಎಂದಿದ್ದಳು. ನಾನು ಆ ಸಮಯದಲ್ಲಿ ಎಚ್ಚರಿಕೆ ಕೊಟ್ಟಿದ್ದೆ. ಮುಂದೆ ಮತ್ತೆ ಇದೇ ರೀತಿ ನಡೆದರೆ ಪೊಲೀಸ್ ಕಂಪ್ಲೈಂಟ್ ಕೊಡುತ್ತೀನಿ ಎಂದಿದ್ದೆ. ಆದ್ರೆ ದೂರು ನೀಡಲು ಹೋಗಿರಲಿಲ್ಲ. ಇಬ್ಬರದ್ದು ಅನ್ಯಜಾತಿಯಾಗಿದ್ದ ಕಾರಣ ಅವರ ಪ್ರೀತಿಗೆ ಅಡ್ಡಿಯಾಗಬಾರದು ಎಂದು ದೂರು ನೀಡಿರಲಿಲ್ಲ. ಆದ್ರೆ ಶ್ರದ್ಧಾ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಕಾಂಟ್ಯಾಕ್ಟ್ ಗೆ ಸಿಕ್ಕಿರಲಿಲ್ಲ ಎಂದಿದ್ದಾರೆ.

ಶ್ರದ್ಧಾ ಮತ್ತು ಅಫ್ತಾಬ್ 2018ರಲ್ಲಿ ಡೇಟಿಂಗ್ ಆಪ್ ಮೂಲಕ ಪರಿಚಯವಾಗಿದ್ದರು. ಬಳಿಕ ಇಬ್ಬರು ಒಂದೇ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ಅದಾದ ಬಳಿಕ ಪ್ರೀತಿ, ಪ್ರೇಮ ಅಂತ ಒಂದೇ ಮನೆಯಲ್ಲಿ ವಾಸವಾಗಿದ್ದರು. ಶ್ರದ್ಧಾ ಇದ್ದಾಗಲೂ ಅಫ್ತಾಬ್ ಡೇಟಿಂಗ್ ಆಪ್ ನಲ್ಲಿ ಆಕ್ಟೀವ್ ಆಗಿದ್ದನಂತೆ. ಶ್ರದ್ಧಾ ಅವನ ಫೋನ್ ಜಿಪಿಎಸ್ ಚೆಕ್ ಮಾಡುತ್ತಿದ್ದಳಂತೆ. ಅವನ ಕಳ್ಳಾಟಗಳೆಲ್ಲಾ ತಿಳಿದ ಮೇಲೆ ಮದುವೆಯಾಗು ಎಂದಿದ್ದಕ್ಕೆ ಜಗಳಗಳು ನಡೆಯುತ್ತಿದ್ದವಂತೆ. ಇದೇ ವಿಚಾರಕ್ಕೆ ಜಗಳ ಅತಿರೇಕಕ್ಕೆ ಹೋಗಿ ಕೊಲೆಯೇ ನಡೆದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸಿದ ಪ್ರತಾಪ್ : ಸಾಕ್ಷಿಗಳು ಬಹಿರಂಗ..!

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುವುದನ್ನು ನೋಡಬಹುದು. ಇದೀಗ ಡ್ರೋನ್ ವಿಚಾರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ. ಡ್ರೋನ್ ಪ್ರತಾಪ್

ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!

ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

error: Content is protected !!