ನಟಿ ರನ್ಯಾ ಸ್ಮಗ್ಲಿಂಗ್; ಸದನದಲ್ಲೂ ಜೋರು ಚರ್ಚೆ

ಬೆಂಗಳೂರು; ಇತ್ತೀಚೆಗಷ್ಟೇ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾ ಅವರು ಸಿಕ್ಕಿಬಿದ್ದಿದ್ದು, ಇದೀಗ ರಾಜಕಾರಣಿಗಳು, ಅಧಿಕಾರಿಗಳ ಕೈವಾಡ ಇರೋದು ಕೂಡ ಅದರಲ್ಲಿ ಪ್ರೂವ್ ಆಗಿದೆ. ಹೀಗಾಗಿ ಈ ಕೇಸನ್ನ ಸಿಬಿಐ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಸದ್ಯ ಡಿಆರ್ಐ ಕಸ್ಟಡಿಯಲ್ಲಿರುವ ರನ್ಯಾ ಬಗ್ಗೆ ಇನ್ನಷ್ಟು ಹೆಚ್ಚಿನ ತನಿಖೆ ನಡೆಯಬೇಕಿದೆ. ಒಂದು ಬಾರಿ ಹೀಗೆ ಗೋಲ್ಡ್ ರವಾನೆ ಮಾಡಿರೋದಲ್ಲ. ಬಹಳ ಕಾಲದಿಂದಾನೂ ಇದು ನಡೆಯುತ್ತಲೇ ಇದೆ. ಹಾಗಾಗಿ ವಿದೇಶದಲ್ಲಿ ಯಾರ ಸಂಪರ್ಕವಿದೆ..? ಇವರ ಹಿಂದೆ ಇದ್ದ ಚಿನ್ನದ ಅಂಗಡಿ‌ಮಾಲೀಕರು ಯಾರ್ಯಾರು ಇದ್ದರು..? ರಾಜಕಾರಣಿಗಳು ಯಾರೆಲ್ಲಾ ಇದ್ದರು ಎಂಬೆಲ್ಲಾ ವಿಚಾರಗಳು ತನಿಖೆಯಿಂದ ಹೊರ ಬರಬೇಕಿದೆ. ಹೀಗಾಗಿ ಈ ಸಂಬಂಧ ಸದನದಲ್ಲಿಯೂ ಈ ವಿಚಾರ ಬಾರೀ ಚರ್ಚೆಗೆ ಗ್ರಾಸವಾಗಿದ್ದು, ಶಾಸಕ ಸುನಿಲ್ ಕುಮಾರ್ ಈ ವಿಚಾರವನ್ನು ತೆಗೆದಿದ್ದಾರೆ. ಇದಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇಲ್ಲಿ ಸ್ಮಗಿಂಗ್ ಆಗಿಲ್ಲ ಅಥವಾ ಅವರ್ಯಾರೋ ಗೋಲ್ಡ್ ತಂದಿಲ್ಲ. ನಮ್ಮ ಹಂತದಲ್ಲಿ ಏನು ತನಿಖೆ ನಡೆಸಬೇಕು ಅದನ್ನೆಲ್ಲ ಮಾಡ್ತೇವೆ. ಆದ್ರೆ ಈಗ ಸಿಬಿಐನವರು ತನಿಖೆ ನಡೆಸುತ್ತಿದ್ದಾರೆ. ಯಾರೂ ಇನ್ವಾಲ್ ಆಗಿದ್ದಾರೆ, ಸ್ಮಗ್ಲಿಂಗ್ ಎಷ್ಟಾಗಿದೆ ಎಂಬುದೆಲ್ಲಾ ತನಿಖೆಯ ನಂತರವಷ್ಟೇ ಗೊತ್ತಾಗಲಿದೆ. ಅದಕ್ಕೂ ಮುಂಚೆ ನಾವೇನು ಹೇಳೋದಕ್ಕೆ ಆಗೋದಿಲ್ಲ. ಸಿಬಿಐ ನವರು ತನಿಖೆ ನಡೆಸುತ್ತಿದ್ದಾರೆ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ.

ಸಿಬಿಐಗೆ ಕೊಟ್ಟಿರೋದು ಗೊತ್ತಿಲ್ಲ ಅಂತಾನೂ ಹೇಳ್ತಾ ಇದ್ದಾರೆ. ಸಿಬಿಐಗೆ ಕೊಡುವುದಕ್ಕೆ ಇನ್ನು ಏನು ಸ್ಪಷ್ಟ ಮಾಡುತ್ತಿಲ್ಲ. ಹಾಗಾದ್ರೆ ಸರ್ಕಾರಕ್ಕೆ ಗೊತ್ತಿಲ್ಲ ಅಂತ ಅಂದ್ರೆ ಹೇಗೆ..? ಇದರಿಂದ ಇನ್ಯಾರದ್ದೋ ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿದೆ ಅಷ್ಟೇ ಎಂದು ವಿಪಕ್ಷ ನಾಯಕರು ವಾಗ್ದಾಳಿ ನಡೆಸಿದ್ದಾರೆ.

suddionenews

Recent Posts

ಹಿರಿಯೂರಿನಲ್ಲಿ ಕಾಂಗ್ರೆಸ್ ಮುಖಂಡರ ಬಡಿದಾಟ

ಸುದ್ದಿಒನ್, ಹಿರಿಯೂರು, ಮಾರ್ಚ್. 19 : ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಬೆಂಬಲಿಗರಿಬ್ಬರು ಸೋಮವಾರ ರಾತ್ರಿ ಟೆಂಡರ್…

7 hours ago

ಚಿತ್ರದುರ್ಗ | ಜಿ.ಪಿ.ಉಮೇಶ್ ನಿಧನ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 19 : ಬ್ಯಾಂಕ್ ಕಾಲೋನಿ ನಿವಾಸಿ ಜಿ.ಪಿ.ಉಮೇಶ್(63) ಬುಧವಾರ ಬೆಳಿಗ್ಗೆ 11-30 ಕ್ಕೆ ಹೃದಯಾಘಾತದಿಂದ ನಿಧನರಾದರು.…

8 hours ago

ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಮಾಧ್ಯಮಗಳ ಸಹಕಾರ ಅಗತ್ಯ : ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್

  ಚಿತ್ರದುರ್ಗ. ಮಾ. 19: ಸಾರ್ವಜನಿಕರೊಂದಿಗೆ ನೇರವಾಗಿ ವ್ಯವಹರಿಸುವ ಇಲಾಖೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅತಿ ಮುಖ್ಯವಾದದು.…

8 hours ago

ಚಿತ್ರದುರ್ಗಕ್ಕೆ ಆಗಮಿಸಿದ ವಿಕಲಚೇತನರ ಬೈಕ್ ರ‌್ಯಾಲಿ : ವಿವಿಧ ಬೇಡಿಕೆ ಈಡೇರಿಸಲು ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

8 hours ago

ಅಲ್ ರೆಹಮಾನ್ ಆರ್ಗನೈಜೆಷನ್ ವತಿಯಿಂದ ರಂಜಾನ್ ರೇಷನ್ ಕಿಟ್ ವಿತರಣೆ

ಸುದ್ದಿಒನ್, ಹರಿಹರ, ಮಾರ್ಚ್. 19 :  ಪವಿತ್ರ ರಂಜಾನ್ ತಿಂಗಳು ದಾನ, ಪರೋಪಕಾರಿ ಸೇವೆ ಮತ್ತು ಮಾನವೀಯತೆಯ ಸಮಯ. ಈ…

9 hours ago

ಸುನಿತಾ ವಿಲಿಯಮ್ಸ್ ಅವರ ಆತ್ಮಸ್ಥೈರ್ಯ, ತಾಳ್ಮೆ ಯುವಪೀಳಿಗೆಗೆ ಮಾದರಿ : ಡಾ.ಕೆ.ಸೌಮ್ಯಾ ಮಂಜುನಾಥ್

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 19 : ಒಂಬತ್ತು ತಿಂಗಳು ಕಾಲ ಬಾಹ್ಯಾಕಾಶದಲ್ಲಿದ್ದು, ಕ್ಯಾಪ್ಸೂಲ್ ಮೂಲಕ ಭೂಮಿಯನ್ನು ತಲುಪಿದ ಗಗನಯಾನಿಗಳಾದ ಸುನಿತಾ…

9 hours ago