Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೆಚ್ಚುತ್ತಿವೆ ಪೊಲೀಸರಿಂದಲೇ ಅಪರಾಧಗಳು : ಲಂಚ ಪಡೆಯಲು ಹೋಗಿ ಮತ್ತಿಬ್ಬರು ಪೊಲೀಸರು ಅರೆಸ್ಟ್..!

Facebook
Twitter
Telegram
WhatsApp

 

ಬೆಳಗಾವಿ: ಪೊಲೀಸರೆಂದರೆ ನಮ್ಮ ರಕ್ಷಕರು. ಅವರಿದ್ದರೆ ಯಾವುದೇ ಭಯವಿರಲ್ಲ. ಕಳ್ಳರಿಗೂ ನಡುಕ ಇದು ಎಲ್ಲರು ನಂಬುವ ಸತ್ಯ. ನಂಬುವಂತೆಯೇ ವ್ಯವಸ್ಥೆ ಕೂಡ ಇದೆ. ಆದ್ರೆ ಆ ವ್ಯವಸ್ಥೆಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರೆಂಬಂತೆ ಪೊಲೀಸರೇ ಕಳ್ಳರ ಜೊತೆ ಸೇರಿ ಅಪರಾಧ ಮಾಡಲು ಶುರು ಮಾಡಿದ್ದಾರೆ. ಅಂಥ ಘಟನೆ ಇತ್ತೀಚೆಗೆ ಸಾಕಷ್ಟು ವರದಿಯಾಗಿದೆ. ಇತ್ತೀಚೆಗೆ ಸ್ಮಗ್ಲಿಂಗ್ ಮಾಲ್ ಅನ್ನ ಪೊಲೀಸರೇ ಮಾರಲು ಹೊರಟಿದ್ದು, ಮೊನ್ನೆ ಮೊನ್ನೆ ಸಿಎಂ ಭದ್ರತೆಗಿದ್ದವರೇ ಗಾಂಜಾ ಮಾರಾಟದಲ್ಲಿ ತಗಲಾಕಿಕೊಂಡಿದ್ದು ಉದಾಹರಣೆ ನೋಡಬಹುದು.

ಇದೀಗ ಮತ್ತೆ ಅಂಥದ್ದೇ ಘಟನೆ ನಡೆದಿದೆ. ಲಂಚ ಪಡೆಯಲು ಹೋಗಿ ಇಬ್ಬರು ಪೊಲೀಸ್ ಅಧಿಕಾರಿಗಳು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಮಟಕಾ ಪ್ರಕರಣ ದಾಖಲಿಸುವುದಾಗಿ ಹೆದರಿಸಿ ಹಣ ಪಡೆಯಲು ಹೋಗಿದ್ದಾರೆ. ಈ ವೇಳೆ ಎಸಿಬಿ ಕೈಗೆ ತಗಲಾಕಿಕೊಂಡಿದ್ದಾರೆ.

ಪ್ರಕರಣ ದಾಖಲಿಸದೇ ಇರಲು ರೂ.50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ರೂ.15,000ಕ್ಕೆ ವ್ಯವಹಾರ ಕುದುರಿಸಿದ್ದರು. ಲಂಚ ಕೇಳಿದ್ದಕ್ಕೆ ಸಂಬಂಧಪಟ್ಟಂತೆ ಪರಶುರಾಮ ಗಾಡಿವಡ್ಡರ ಸೋಮವಾರ ಎಸಿಬಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಕಾರ್ಯಾಚರಣೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳು, ಲಂಚ ಪಡೆಯುವಾಗ ದಾಳಿ ನಡೆಸಿ ಇಬ್ಬರೂ ಪೊಲೀಸ್ ಪೇದೆಗಳನ್ನು ವಶಕ್ಕೆ ಪಡೆದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

ಚಿತ್ರದುರ್ಗ | ಕಣಿವೆಯಿಂದ ಠಾಣೆಗೆ ಬಂದ ಮಾರಮ್ಮನ ರೋಚಕ ಕಥೆ..!

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 29 :  ಚಿತ್ರದುರ್ಗ ನಗರ ಪೊಲೀಸ್ ಠಾಣೆ ಆವರಣದಲ್ಲಿ ಶ್ರೀ ಕಣಿವೆ ಮಾರಮ್ಮ ದೇವಿ ಆಸೀನಳಾಗಿ ಬಹು ವಿಜೃಂಭಣೆಯಿಂದ ರಾರಾಜಿಸುತ್ತಿದ್ದಾಳೆ, ತಾಯಿ. ಅಸಂಖ್ಯಾತ ಭಕ್ತಜನ ದಿನದಿನವೂ ಅರ್ಚನೆ, ಹರಕೆಗಳಿಂದ ಇದೀಗ

ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ!

ಈ ರಾಶಿ ಒಲ್ಲದ ಮನಸಿಗೆ ಮದುವೆ ಯೋಗ, ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ! ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್-29,2024 ಸೂರ್ಯೋದಯ: 06:16, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944,

error: Content is protected !!