ಚಿಕ್ಕಬಳ್ಳಾಪುರ: ರಾಜ್ಯದೆಲ್ಲೆಡೆ ಮಳೆ ನಾಪತ್ತೆಯಾಗಿದೆ. ಮಳೆ ಸರಿಯಾದ ಸಮಯಕ್ಕೆ ಬಂದಿದ್ದರೆ, ಇಷ್ಟೊತ್ತಿಗೆ ಹೊಲದಲ್ಲಿ ಬೀಜ ಮೊಳಕೆಯೊಡೆಯಬೇಕಿತ್ತು. ಆದರೆ ಮಳೆ ಗಗನ ಕುಸುಮವಾಗಿದೆ. ರೈತನ ನಿರೀಕ್ಷೆಯನ್ನೇ ಹುಸಿಗೊಳಿಸಿದೆ. ಮಳೆ ಬಾರದೆ ಇದ್ದಲ್ಲಿ ಸರ್ಕಾರ ಮೋಡ ಬಿತ್ತನೆ ಮಾಡುವ ಸಂಪ್ರದಾಯವಿಟ್ಟುಕೊಂಡಿದೆ. ಇತ್ತ ಜನ ಕೂಡ ಮಳೆಗಾಗಿ ಕಪ್ಪೆಗಳ ಮದುವೆ ಮಾಡಿಸುತ್ತಾರೆ. ಆದ್ರೆ ಚಿಕ್ಕಬಳ್ಳಾಪುರದಲ್ಲಿ ತುಂಬಾ ವಿಚಿತ್ರವಾದ ಸಂಪ್ರದಾಯವೊಂದು ಇದೆ.
ಬಾಗೇಪಲ್ಲಿಯ ಮಾಡಪ್ಪಲ್ಲಿಯ ಗ್ರಾಮದಲ್ಲಿನ ಜನ ಮಳೆಗಾಗಿ ದೇವರನ್ನೇ ಸುಡುತ್ತಾರೆ. ಮಳೆಗಾಗಿ ದೇವರನ್ನೇ ಸುಟ್ಟಿದ್ದಾರೆ. ಊರಿನ ಜನರು ಗ್ರಾಮದೇವತೆಗಳಿಗೆ ಬೆಂಕಿ ಹಚ್ಚಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ವಿಶೇಷ ಅಂದ್ರೆ ಮದುವೆಯಾಗದ ಯುವಕರಿಂದ ಈ ಆಚರಣೆ ಮಾಡಿಸಿದ್ದಾರೆ. ಈ ರೀತಿ ಆಚರಣೆ ಮಾಡುವುದರಿಂದ ಮಳೆ ಬರುತ್ತೆ ಎಂದೇ ಇಲ್ಲಿನ ಮಂದಿ ನಂಬಿದ್ದಾರೆ.
ಹೀಗಾಗಿ ಇಲ್ಲಿನ ವಿಚಿತ್ರ ಸಂಪ್ರದಾಯ ಕಂಡು ಎಲ್ಲರು ಅಚ್ಚರಿಗೊಂಡಿದ್ದಾರೆ. ಗ್ರಾಮದೇಚತೆಗಳನ್ನು ಸುಡುವಾಗ ಗಂಗಮ್ಮನ ಸುಡ್ರೋ.. ಚೌಡೇಶ್ವರಿಯನ್ನು ಸುಡ್ರೋ ಅಂತೆಲ್ಲಾ ಘೋಷಣೆ ಕೂಗಿದ್ದಾರೆ. ಈ ರೀತಿ ಕೂಗಿಕೊಂಡು ಆಚರಣೆ ಮಾಡಿದ್ದಾರೆ.
ಈ ರಾಶಿಯವರಿಗೆ ವ್ಯಾಪಾರದಲ್ಲಿ ತುಂಬಾ ಅಡಚಣೆ, ಈ ರಾಶಿಗಳ ಮದುವೆಗೆ ತುಂಬಾ ಅಡಚಣೆ, ಭಾನುವಾರ ರಾಶಿ ಭವಿಷ್ಯ 23 ಫೆಬ್ರವರಿ…
ಸುದ್ದಿಒನ್, ಹಿರಿಯೂರು, ಫೆಬ್ರವರಿ. 22 : ಅಬ್ಬಿನಹೊಳೆ ಮತ್ತು ಹೊಸದುರ್ಗ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಶ್ರೀಗಂಧ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 22 : ಮಹಾರಾಷ್ಟ್ರದಲ್ಲಿ ರಾಜ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನ ನಿರ್ವಾಹಕನಿಗೆ ಮರಾಠಿಗರು ಕನ್ನಡದಲ್ಲಿ ಟಿಕೆಟ್ ಕೇಳಿದ…
ಚಿತ್ರದುರ್ಗ. ಫೆ.22: ರಾಜ್ಯದ ರೈತರಿಗೆ ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆಗೆ ರಾಜ್ಯ ಸರ್ಕಾರ ಸಂಕಲ್ಪ ಮಾಡಿದೆ ಎಂದು ಯೋಜನಾ ಮತ್ತು…
ಚಿತ್ರದುರ್ಗ. ಫೆ.22: ಇ-ಖಾತಾ ಅಭಿಯಾನ ಮತ್ತು ಸಹಾಯವಾಣಿ ಕೇಂದ್ರಕ್ಕೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…