Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಫೆಬ್ರವರಿ 14 ರಿಂದ 18 ರವರೆಗೆ ಕಬೀರಾನಂದ ಆಶ್ರಮದಲ್ಲಿ 93ನೇ ಮಹಾಶಿವರಾತ್ರಿ ಮಹೋತ್ಸವ : ಅದ್ದೂರಿಯಾಗಿ ಆಚರಣೆಗೆ ಸಮಿತಿ ನಿರ್ಧಾರ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಫೆ.10) :  ಫೆಬ್ರವರಿ 14 ರಿಂದ 18 ರವರೆಗೆ ನಡೆಯಲಿರುವ ನಗರದ ಶ್ರೀ ಕಬೀರಾನಂದ ಆಶ್ರಮದಲ್ಲಿ ನಡೆಯುವ ಶಿವನಾಮ ಸಪ್ತಾಹದ ಅಂಗವಾಗಿ 93ನೇ ಮಹಾಶಿವರಾತ್ರಿ ಮಹೋತ್ಸವವನ್ನು ಯಾವುದೇ ರೀತಿಯಲ್ಲಿ ಕುಂದು ಬಾರದ ರೀತಿಯಲ್ಲಿ ನಡೆಸಲು ವಿವಿಧ ಸಮಿತಿಯ ಮುಖಂಡರು ತೀರ್ಮಾನಿಸಿದರು.

ನಗರದ ಕಬೀರಾನಂದಾಶ್ರಮದಲ್ಲಿ ಶಿವರಾತ್ರಿ ಮಹೋತ್ಸವದ ಅಂಗವಾಗಿ ವಿವಿಧ ಸಮಿತಿಗಳ ಸಭೆಯನ್ನು ನಡೆಸಿದ ಪದಾಧಿಕಾರಿಗಳು ಎಂದಿನಂತೆ ಈ ಭಾರಿಯೂ ಶಿವರಾತ್ರಿ ಮಹೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಬೇಕಿದೆ. ಇಲ್ಲಿ ಯಾವುದಕ್ಕೂ ಸಹಾ ತೊಂದರೆಯಾಗದ ರೀತಿಯಲ್ಲಿ ನಡೆಯಬೇಕಿದೆ. ಚಿತ್ರದುರ್ಗದಲ್ಲಿ ಈ ಆಶ್ರಮದಲ್ಲಿ ಮಾತ್ರವೇ ಶಿವರಾತ್ರಿ ಮಹೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ ಇದು ಜಾತ್ಯಾತೀತ ಮಠವಾಗಿದೆ ಇಲ್ಲಿ ಒಂದು ಜಾತಿಯವರು ಅಲ್ಲದೆ ಎಲ್ಲಾ ಜಾತಿಯವರು ಸಹಾ ಬರುತ್ತಾರೆ. ಇಲ್ಲಿಗೆ ಭಕ್ತರೇ ಆಧಾರವಾಗಿದ್ದಾರೆ ಶ್ರೀಗಳು ಯಾರಿಂದಲೂ ಸಹಾ ಒತ್ತಾಯವಾಗಿ ದೇಣಿಗೆಯನ್ನು ಕೇಳುವುದಿಲ್ಲ ಭಕ್ತರೇ ಇಷ್ಠು ಪಟ್ಟು ನೀಡಿದರೆ  ಮಾತ್ರ ಪಡೆಯುತ್ತಾರೆ.

ಈ ರಚನೆ ಮಾಡಿರುವ ಸಮಿತಿಯವರು ಅವರ ಕೆಲಸವನ್ನು ಮಾಡುವುದರ ಮೂಲಕ ಮಹೋತ್ಸವನ್ನು ಅಚ್ಚುಕಟ್ಟಾಗಿ ಮಾಡಬೇಕಿದೆ. ಇದು ಆರೂಢ ಪರಂಪರೆಯ ಮಠವಾಗಿದ್ದು ಇಲ್ಲಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಮಹೋತ್ಸವದ ಕೆಲಸವನ್ನು ಮನೆಯ ಕೆಲಸದ ಹಾಗೇ ಎಲ್ಲರು ಸೇರಿ ಮಾಡಬೇಕಿದೆ.

ಫೆ. 12 ರಿಂದ ಶಿವನಾಮ ಸಪ್ತಾಹದ ಅಂಗವಾಗಿ ಅಂದು ಗೊಪೂಜೆಯನ್ನು ಮಾಡುವುದರ ಮೂಲಕ ಚಾಲನೆಯನ್ನು ನೀಡಿ ಮಹೋತ್ಸವ ಮುಗಿಯುವವರೆಗೂ ಆಶ್ರಮದಲ್ಲಿ ನಿರಂತರವಾಗಿ ಸಾಮೂಹಿಕವಾಗಿ ಶ್ರೀಮದ್ ಭಗವದ್ಗೀತಾ ಪಾರಾಯಣ ನಡೆಯಲಿದೆ.

ಫೆ. 14 ರಿಂದ ಪ್ರಾರಂಭವಾಗುವ ಶಿವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿ ದಿನ ನಡೆಯುವ ಕಾರ್ಯಕ್ರಮದಲ್ಲಿ ನಾಡಿನ ಸುಪ್ರಸಿದ್ದ ವಿವಿಧ ಮಠಾಧಿಶರು, ಸಾಹಿತಿಗಳು, ಗಣ್ಯರು ರಾಜಕಾರಣಿಗಳು ಆಗಮಿಸುವುದರ ಮೂಲಕ ಸಂದೇಶವನ್ನು ನೀಡಲಿದ್ದಾರೆ ಎಂದರು.

ಈ ಸಭೆಯಲ್ಲಿ ಶ್ರೀಮಠದ ನಿರಂಜನ ಮೂರ್ತಿ, ತಿಪ್ಪೇಸ್ವಾಮಿ, ಶಾಸ್ತ್ರಿ, ವಿಎಚ್ ಪಿಯ ರುದೇಶ್, ಓಂಕಾರ್, ವೆಂಕಟೇಶ್, ಪವನ್, ನಂದಿನಾಗರಾಜ್, ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಿ, ಮೋದಿ, ಅಮಿತ್ ಶಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಚಿತ್ರದುರ್ಗ: ಈ ತಿಂಗಳ 26 ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡ್ತೀನಿ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮೋದಿಯವರು ಪ್ರಧಾನಿಯಾಗಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ: ಪ್ರಿಯಾಂಕಾಗಾಂಧಿ ಭರವಸೆ

ಚಿತ್ರದುರ್ಗ ಏ 23: ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸಲು ಮೇಲದ ಮೇಲೆ ನಾವು ಕೇಂದ್ರಕ್ಕೆ ಕೇಳುತ್ತಲೇ ಇದ್ದೇವೆ. ಆದರೂ ಇದುವರೆಗೂ ಏಕೆ ಸ್ಪಂದಿಸುತ್ತಿಲ್ಲ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ಇಲ್ಲಿ

ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿ.ಎಂ. ಸಿದ್ದರಾಮಯ್ಯ

ಚಿತ್ರದುರ್ಗ ಏ 23: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ

error: Content is protected !!