ಶಿಕ್ಷಣ ಸಚಿವ ನಾಗೇಶ್ ಮನೆ ಮೇಲೆ ದಾಳಿ ಮಾಡಿದ್ದ 15 ಜನರ ಬಂಧನ..!

suddionenews
1 Min Read

ತುಮಕೂರು: ಇಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮನೆ ಮೇಲೆ ದಾಳಿ ನಡೆದಿದೆ. ಈ ದಾಳಿ ಮಾಡಿದವರ ಪೈಕಿ ಹದಿನೈದು ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ಸಂಬಂಧ ಮಾತನಾಡಿದ, ಗೃಹ ಸಚಿವ ಆರಗ ಜ್ಞಾನೇಂದ್ರ, ಈ ಘಟನೆಯನ್ನು ಖಂಡಿಸುತ್ತೇವೆ ಎಂದಿದ್ದಾರೆ.

ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮನೆ ಮೇಲೆ, ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ದಾಳಿ ನಡೆಸಿದೆ. ಮನೆ ಬಳಿ ದಾಂಧಲೆ ನಡೆಸಿದ್ದಾರೆ. ಬೆಂಕಿ ಹಚ್ಚು ಕೆಲಸ ಮಾಡಿದ್ದಾರೆ. ಇದು ಗೂಂಡಾಗಳ ರೀತಿಯಲ್ಲಿ ವರ್ತಿಸುವ ಕೆಲಸ.‌ ಅವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ. ಇಂಥಹ ವರ್ತನೆ ಇನ್ನು ಮುಂದೆ ನಡೆಯಬಾರದು ಎಂದಿದ್ದಾರೆ.

ಇನ್ನು ಪ್ರಕರಣ ಸಂಬಂಧ 15 ಜನರನ್ನು ಬಂಧಿಸಲಾಗಿದೆ. ಈ ಘಟನೆಯನ್ನು ನೋಡುತ್ತಿದ್ದರೆ ಇದು ಪೂರ್ವನಿಯೋಜಿತವಾಗಿಯೇ ಮಾಡಿರಬೇಕು ಎನಿಸುತ್ತದೆ. ಯಾಕೆಂದರೆ ಸಚಿವ ನಾಗೇಶ್ ಅವರ ಮನೆ ಮೇಲೆ ದಾಳಿ ನಡೆಸಲು ಬೆಂಗಳೂರಿನಿಂದ ಐದು ಜನ, ಭದ್ರಾವತಿಯಿಂದ ಒಬ್ಬ, ಚಿಕ್ಕಮಗಳೂರು, ದಾವಣಗೆರೆಯಿಂದ ತಲಾ ಇಬ್ಬರು ಬಂದಿದ್ದಾರೆ. ಇದನ್ನು ನೋಡಿದರೆ ತಿಳಿಯುತ್ತದೆ ಅಲ್ಲವೇ. ಇದೊಂದು ಪೂರ್ವನಿಯೋಜಿತವೆಂದು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *