Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಂತ್ರಿ ಸ್ಥಾನ ಕೊಟ್ಟು ಕಸಿದುಕೊಂಡಿದ್ದೇಕೆ..? ನಾನೇನು ರೇಪ್ ಮಾಡಿದ್ದೇನಾ..? : ಲಕ್ಷ್ಮಣ್ ಸವದಿ ಮಾತಿನ ಅರ್ಥವೇನು..?

Facebook
Twitter
Telegram
WhatsApp

 

ಬಿಜೆಪಿಯಲ್ಲಿ ಒಂದೊಂದೆ ವಿಕೆಟ್ ಉರುಳುತ್ತಾ ಇದೆ. ಟಿಕೆಟ್ ಸಿಗದ ಕಾರಣಕ್ಕೆ ರಾಜೀನಾಮೆಯ ಹಾದಿ ಹಿಡಿಯುತ್ತಿದ್ದಾರೆ. ಕೆಲವೊಂದಿಷ್ಟು ಮಂದಿ ಟಿಕೆಟ್ ಸಿಗದೆ ಇದ್ದದ್ದಕ್ಕೆ ರೊಚ್ಚಿಗೆದ್ದಿದ್ದಾರೆ. ಲಕ್ಷ್ಮಣ್ ಸವದಿ ಕೂಡ ಟಿಕೆಟ್ ಸಿಗಲಿಲ್ಲ ಅಂತ ತನ್ನದೇ ಆದ ತೀರ್ಮಾನಕ್ಕೆ ಬಂದಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಮ್ಮ ಮನಸ್ಸಿನೊಳಗಿದ್ದ ಆಕ್ರೋಶ ಹೊರ ಹಾಕಿದ್ದಾರೆ.

ಅಥಣಿಯಲ್ಲಿ ಮಾತನಾಡಿದ ಲಕ್ಷ್ಮಣ್ ಸವದಿ, ಮಂತ್ರಿ ಸ್ಥಾನ ಕೊಡಿ ಎಂದು ನಾನು ಯಾವತ್ತಿಗೂ ಕೇಳಿರಲಿಲ್ಲ. ಕೊಟ್ಟು ಮತ್ತೆ ಕಸಿದುಕೊಂಡಿದ್ದು ಯಾಕೆ..? ನಾನೇನಾದ್ರೂ ರೇಪ್ ಮಾಡಿದ್ದೇನಾ ಎಂದು ಬೇಸರ ಹೊರ ಹಾಕಿದ್ದಾರೆ.

ಮಂತ್ರಿ ಸ್ಥಾನದಿಂದ ತೆಗೆಧ್ದು ಯಾಕೆ..? ನ್ಯಾಯ ಸಿಗುತ್ತೆ ಎಂದು ಸುಮ್ಮನೆ ಇದ್ದೆ. ಸಾಯಂಕಾಲ ಜನರ ಅಭಿಪ್ರಾಯ ಕೇಳಿ ಕ್ರೋಢೀಕರಿಸಿ ಒಂದು ತೀರ್ಮಾನಕ್ಕೆ ಬರುತ್ತೇನೆ. ವಿಚಾರಧಾರೆಗಳು ಬೇರೆ ಬೇರೆ ಇತ್ತು. ಆದರೆ ಕೂಡಿ ಕೆಲಸ ಮಾಡಿದ್ದೀವಿ. ನಿರ್ಲಕ್ಷ್ಯ ಮಾಡಿದ್ದಕ್ಕೆ ನೋವಾಗಿದೆ‌. ಟಿಕೆಟ್ ಕೈತಪ್ಪಿದ್ದಕ್ಕೆ ಮಾತ್ರವಲ್ಲ. ಪಕ್ಷದಲ್ಲಿ ಅವಮಾನಗಳು, ಅಸೂಯೆಗಳು ಆಗಿದೆ.

ರಾಜ್ಯ ನಾಯಕರು ನೀಡಿರುವ ತೊಂದರೆ ಅನುಭವಿಸಿದ್ದೇನೆ. ಆಂತರಿಕ ನೋವುಗಳಾಗಿದೆ. ವೇದಿಕೆ ಅವಕಾಶ ಕೊಡದೇ ನನ್ನನ್ನು ದೂರ ಸರಿಸಲಾಗಿದೆ. ಟಿಕೆಟ್ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿಲ್ಲ. ಮಂತ್ರಿ ಸ್ಥಾನದಿಂದ ಇಳಿಸಿದಾಗಲೂ ನಾನು ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ಬೇರೆಯವರ ಮನಸ್ಸು ನೋಯಿಸಿದರೆ ನನಗೆ ಲಾಭ ಆಗಲ್ಲ. ಹೈಕಮಾಂಡ್ ನನ್ನ ಮಾತಿಗೆ ಗೌರವ ನೀಡಿಲ್ಲ. ನಾಳೆ‌ ಮಧ್ಯಾಹ್ನ ಬೆಂಗಳೂರಿಗೆ ತೆರಳಿ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೆಣಸಿನಕಾಯಿ ಕತ್ತರಿಸಿದ ನಂತರ ನಿಮ್ಮ ಕೈಗಳು ಉರಿಯದಂತೆ ತಡೆಯಲು ಹೀಗೆ ಮಾಡಿ….!

ಸುದ್ದಿಒನ್ : ಮೆಣಸಿನಕಾಯಿ ಕತ್ತರಿಸಿದ ನಂತರ ಕೈಗಳು ಉರಿಯುತ್ತವೆ.  ಇದು ಕೆಲವೊಮ್ಮೆ ಹೆಚ್ಚು ಆಗಬಹುದು. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕವೇ ಇದಕ್ಕೆ ಕಾರಣ. ಮತ್ತು ಈ ಉರಿಯನ್ನು ಕಡಿಮೆ ಮಾಡಲು ಯಾವ ಸಲಹೆಗಳನ್ನು ಅನುಸರಿಸಬಹುದು

ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದೆ. ಇದರಿಂದಾಗಿ ಅನೇಕರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೇಸಿಗೆಯ ಧಗೆಗೆ ತಕ್ಕಂತೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸಬೇಕು. ಈ ಬೇಸಿಗೆಯಲ್ಲಿ ಪ್ರತಿದಿನ ಸೌತೆಕಾಯಿಯನ್ನು ತಿನ್ನುವುದು ಒಳ್ಳೆಯದು.

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ, ಶನಿವಾರ- ರಾಶಿ ಭವಿಷ್ಯ ಏಪ್ರಿಲ್-20,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

error: Content is protected !!