ಮುಸ್ಲಿಂ ಸಂಘಟನೆಯಿಂದ ಬಂದ್ ಗೆ ಕರೆ : ತುಮಕೂರಿನಲ್ಲಿ ಅಂಗಡಿಗಳು ಕ್ಲೋಸ್..!

suddionenews
1 Min Read

 

ತುಮಕೂರು: ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದೆ. ಶಾಲಾ ಕಾಲೇಜಿನಲ್ಲಿ ಹಿಜಾಬ್ ಹಾಕುವುದನ್ನ ನಿಷೇಧಿಸಿದೆ. ಈ ಸಂಬಂಧ ಮುಸ್ಲಿಂ ಸಂಘಟನೆಯವರು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ತುಮಕೂರಿನಲ್ಲಿ ಮುಸ್ಲಿಂ ರಿಗೆ ಸಂಬಂಧಿಸಿದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.

ಕಾಲ್ ಟ್ಯಾಕ್ಸ್, ಬಿಜಿ ಪಾಳ್ಯ, ಗುಬ್ಬಿ ಗೇಟ್, ಕುಣಿಗಲ್ ಸರ್ಕಲ್ ಸೇರಿದಂತೆ ನಗರದ ಹಲವೆಡೆ ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದಾರೆ. ಇಲ್ಲೆಲ್ಲಾ ಮುಸಲ್ಮಾನರು ತಾವು ನಡೆಸುತ್ತಿದ್ದ ಅಂಗಡಿಗಳನ್ನ ಬಂದ್ ಮಾಡಿದ್ದಾರೆ.

ಇನ್ನು ಹಿಜಾಬ್ ಗೆ ಸಂಬಂಧಿಸಿದಂತೆ ಕೋರ್ಟ್ ನೀಡಿದ ತೀರ್ಪು ನಮಗೆ ಬೇಸರ ತಂದಿದೆ. ಕಾನೂನಿಂದ ನಮಗೆ ಯಾವುದೆ ರೀತಿಯ ನೆರವು ಸಿಕ್ಕಿಲ್ಲ ಎಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಈ ಬಂದ್ ಗೆ ಅಷ್ಟಾಗಿ ರೆಸ್ಪಾನ್ಸ್ ಸಿಕ್ಕಿಲ್ಲ.

Share This Article
Leave a Comment

Leave a Reply

Your email address will not be published. Required fields are marked *