ಮಾಜಿ ಸಿಎಂಗಳಿಗೆ ಬೆದರಿಕೆ ಪತ್ರ : ಕ್ಷಮೆ ಕೇಳಲು ಪತ್ರದಲ್ಲಿ ಉಲ್ಲೇಖ

suddionenews
1 Min Read

 

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ, ಪರಿಷತ್ ವಿಪಕ್ಷ ಬಿ.ಕೆ ಹರಿಪ್ರಸಾದ್ ಗೆ ಬೆದರಿಕೆ ಪತ್ರ ಬಂದಿದೆ ಎನ್ನಲಾಗಿದೆ. ಸಾಹಿತಿ ಬಿ.ಎಲ್ ವೇಣು ಅವರಿಗೆ ಬರೆದ ಪತ್ರದಲ್ಲಿ ಮಾಜಿ ಸಿಎಂಗಳ ಹೆಸರು ಉಲ್ಲೇಖವಾಗಿದೆ.

 

ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಕಾರ ಗಲ್ಲಿಗೇರಿಸಬೇಕು ಅಥವಾ ಗುಂಡಿಕ್ಕಿ ಹೊಡೆಯಬೇಕು ಎಂದೂ ಉಲ್ಲೇಖ ಮಾಡಲಾಗಿದೆ. ಅನಾಮಧೇಯ ವ್ಯಕ್ತಿಯಿಂದ ಕೈ ಬರಹದಲ್ಲಿ ಬರೆದ ಬೆದರಿಕೆ ಪತ್ರ ಇದಾಗಿದೆ. ಸಾವರ್ಕರ್ ಕುರಿತು ನೀಡಿದ ಹಗುರ ಮಾತಿಗೆ ಕ್ಷಮೆ ಕೇಳಬೇಕು ಎಂದು‌ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ಸಾವರ್ಕರ್ ಬಗ್ಗೆ‌ ನೀವು ಹೀಯಾಳಿಸಿ ಮಾತನಾಡಿದ್ದು ನಿಮಗೆ ಶೋಭೆ ತರಲ್ಲ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು 5 ನೇ ತರಗತಿ ಪಠ್ಯದಲ್ಲಿ ಹಲವಾರು ವಿಷಯ ತೆಗೆದಿದ್ದಾರೆ. ಬರಗೂರು ಅವರಿಗೆ ಬೆಂಬಲಿಸುವ ಬಿ.ಎಲ್ ವೇಣು ಸೇರಿದಂತೆ 61 ಸಾಹಿತಿಗಳನ್ನ ಏನೂ ಮಾಡಬೇಕು?. ಪಠ್ಯದಲ್ಲಿ ಭಗವದ್ಗೀತೆ ಅಂಶ ಸೇರಿಸದಂತೆ ಎಲ್ಲರೂ ಸರ್ಕಾರಕ್ಕೆ ಪತ್ರ ನೀಡಿದ್ದರು. BL ವೇಣು ಅವರೇ ಇಂಥವರಿಗೆ ನೀವು ಬುದ್ದಿ ಹೇಳಿ, ಇಲ್ಲ ಕಾಲನ ಉಪಚಾರಕ್ಕೆ ಸಿದ್ದರಾಗಿ ಎಂದು ಬೆದರಿಕೆ ಒಡ್ಡಿದ್ದು, ಅಂಚೆ ಮೂಲಕ ಕಾದಂಬರಿಕಾರ BL ವೇಣು ಅವರಿಗೆ ಪತ್ರ ರವಾನೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *